ಸಂತೋಷ್ ತಮ್ಮಯ್ಯ
ಕರ್ನಾಟಕ ಕಂಡ ದಕ್ಷ ಮತ್ತು ದಿಟ್ಟ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಅನುಭವಗಳನ್ನು ಹೇಳುತ್ತಿದ್ದರು.
“ಒಂದು ದಿನ ನಾನಿದ್ದ ಸ್ಟೇಷನ್ಗೆ ಪತ್ರಕರ್ತನೊಬ್ಬ ಬಂದ. ಆತ ಅಪರಾಧ ವರದಿಗಾರಿಕೆಗಾಗಿ ಅಲ್ಲಿಗೆ ಬಂದಿದ್ದ. ಬಂದ ಕೆಲಸ ಮುಗಿದರೂ ಆತ ಹೊರಡಲಿಲ್ಲ. ಏನೇನೋ ಹರಟುತ್ತಾ ಆತ ಅಲ್ಲೇ ಕುಳಿತಿದ್ದ. ಆತನೊಬ್ಬ ಮುಸಲ್ಮಾನ. ಅದೇ ಸ್ಟೇಷನ್ನಿನಲ್ಲಿದ್ದ ಅಧಿಕಾರಿಯೊಬ್ಬರು ಕೂಡಾ ಮುಸಲ್ಮಾನರಾಗಿದ್ದರು. ಈತ ಅವರನ್ನು ಕಾಯುತ್ತಿದ್ದ. ಭೇಟಿಯ ವಿಷಯವೇನು ಎಂದು ನಾನು ಆತನಲ್ಲಿ ಕೇಳಿದೆ. ಆತ ಮುಚ್ಚುಮರೆಯಿಲ್ಲದೆ ತನ್ನ ಅಂತರಂಗದಲ್ಲಿರುವುದನ್ನು ಹೇಳಿಕೊಂಡ. ಅದರ ತಾತ್ಪರ್ಯವಿಷ್ಟೇ, ಕೆಲದಿನಗಳ ಹಿಂದೆಯಷ್ಟೇ ಬೆಂಗಳೂರಿನ ಓರ್ವ ಕ್ರೈಂ ಪತ್ರಿಕೆಯ ಸಂಪಾದಕನೊಬ್ಬ ಭೂಗತ ಜಗತ್ತಿನ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ ಬೆಳೆಯುತ್ತಿದ್ದ. ಪತ್ರಿಕೆ ಬೆಳೆದಂತೆ ಆತನಿಗೆ ನಾಡು-ನುಡಿಯ ಬಗ್ಗೆ ಚಳವಳಿಯನ್ನೂ ಆರಂಭಿಸಿ ರಾಜ್ಯದಲ್ಲಿ ಖ್ಯಾತನಾಮನಾಗಬೇಕೆಂಬ ಅಭಿಲಾಷೆಯೂ ಹುಟ್ಟಿತು. ಅದೇ ಹೊತ್ತಲ್ಲಿ ಇನ್ನೊಂದಿಬ್ಬರೂ ಕೂಡಾ ಪತ್ರಿಕೆ ಆರಂಭಿಸಿ ನಾಡು-ನುಡಿ ರಕ್ಷಣೆಯ ಸಂಘಟನೆಗಳನ್ನು ಕಟ್ಟಿಕೊಳ್ಳತೊಡಗಿದರು. ಈ ಬೆಳವಣಿಗೆಗಳೆಲ್ಲವನ್ನೂ ಗಮನಿಸುತ್ತಿದ್ದ ಆ ಮುಸಲ್ಮಾನ ವರದಿಗಾರನಿಗೆ ತಾನೂ ಆ ದಾರಿಯಲ್ಲೇ ಸಾಗಬೇಕು. ಪ್ರತಿಷ್ಠಿತ ವ್ಯಕ್ತಿಯಾಗಬೇಕೆಂಬ ಉಮ್ಮೇದು ಉಂಟಾಯಿತು. ಈ ಬಗ್ಗೆ ಸಲಹೆ ಕೇಳಲು ಆತ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗುವವನಿದ್ದ. ಅದೇ ಹೊತ್ತಿಗೆ ಆ ಅಧಿಕಾರಿ ಠಾಣೆಗೆ ಆಗಮಿಸಿದರು. ಈತ ಅವರ ಬಳಿ ತನ್ನ ಇಂಗಿತವನ್ನು ಅರುಹಿದ. ಅವರು ಯೋಚಿಸಿ ಏನೋ ಹೊಳೆದವರಂತೆ “ನೋಡು ಭಾಷೆ-ನೀರು ಇತ್ಯಾದಿಗಳ ವಿಷಯದಲ್ಲಿ ನೀನು ಸಂಘ ಕಟ್ಟಿದರೆ ಏನೂ ಬೇಳೆ ಬೇಯುವುದಿಲ್ಲ. ಟಿಪ್ಪು ಸುಲ್ತಾನನ ಹೆಸರಿಟ್ಟುಕೊಂಡು ಸಂಘಕಟ್ಟು. ಅವರ ಹೆಸರಲ್ಲಿ ಯಾರೂ ಸಂಘ ಕಟ್ಟಿಲ್ಲ. ಆಗ ಮುಸಲ್ಮಾನರೆಲ್ಲರೂ ನಿನ್ನ ಹಿಂದೆ ಬರುತ್ತಾರೆ. ಅವರ ಜನ್ಮಾಚರಣೆಯನ್ನು ಮಾಡು. ನೀನೂ ಬೆಳೀತಿಯಾ” ಎಂದರು. ಆ ವರದಿಗಾರ ಖುಷಿಯಾದ. ಹುದಾಫಿಸ್ ಎಂದು ವಂದಿಸಿ ಹೊರಟುಹೋದ. ಅದಾದ ಕೆಲದಿನಗಳಲ್ಲೇ ಆತ ಟಿಪ್ಪುಸುಲ್ತಾನ್ ಹೆಸರಿನ ಸಂಘಟನೆಯನ್ನು ಕಟ್ಟಿ ಆತನ ಜನ್ಮಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೊಡಲು ಠಾಣೆಗೆ ಬಂದ. ಆತ ನನಗೂ ಆಮಂತ್ರಣ ಪತ್ರಿಕೆಯನ್ನು ಕೊಡಲು ಬಂದ. ನಾನು ಸಾಹೇಬರಿಗೆ ಕೊಡು ಸಾಕು ಎಂದು ಆತನನ್ನು ಕಳುಹಿಸಿದೆ. ನನ್ನ ಪೂರ್ವಿಜರನ್ನು ಕೊಂದವನ ಜನ್ಮಾಚರಣೆಯ ಆಮಂತ್ರಣ ಪತ್ರಿಕೆ! ಮನಸ್ಸು ನೋವಿನಿಂದ ಹಿಂಡಿತು. ಮುಂದೆ ಆತ ಟಿಪ್ಪು ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದ. ಇದು ಕೆಲವು ಮುಸಲ್ಮಾನರ ಕಣ್ಣನ್ನು
ಕುಕ್ಕತೊಡಗಿತು. ಅವರು ಇವನಿಗೆ ಪರ್ಯಾಯವಾಗಿ ಟಿಪ್ಪು ಹೆಸರಿನ ಹಲವು ಸಂಘಗಳನ್ನು ಕಟ್ಟತೊಡಗಿದರು. ಹೀಗೆ ಬೆಂಗಳೂರಿನಲ್ಲಿ ಆರಂಭವಾದ ಟಿಪ್ಪು ಸಂಘ ಕಟ್ಟುವ ಪೈಪೋಟಿ ಮೈಸೂರು, ಶ್ರೀರಂಗಪಟ್ಟಣ, ಕೊಡಗು, ಕೋಲಾರ, ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು, ಭಟ್ಕಳ, ಕಾರವಾರಗಳಿಗೆಲ್ಲಾ ಹರಡಿತು. ಅಥವಾ ಬೆಂಗಳೂರಿನ ಸಂಘಗಳ ಶಾಖೆಗಳು ಅಲ್ಲೆಲ್ಲಾ ಶುರುವಾದವು.”
೮೦ರ ದಶಕದಲ್ಲಿ ಆರಂಭವಾದ ಈ ಪ್ರಕ್ರಿಯೆ ಇಂದು ಈ ಪರಿಸ್ಥಿತಿಗೆ ಮುಟ್ಟುತ್ತದೆ ಎಂದು ನಾನೆಣಿಸಿರಲಿಲ್ಲ ಎಂದು ಆ ಪೊಲೀಸ್ ಅಧಿಕಾರಿ ಇಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯ ಸ್ವಾರ್ಥದಿಂದ, ಪದವಿಯಾಸೆಯಿಂದ ಶುರುವಾದ “ಟಿಪ್ಪು ಚಳವಳಿ” ಮುಂದೆ ಭಯೋತ್ಪಾದಕ ಸಂಘಟನೆಗಳ ಅಜೆಂಡಾ ಆಗುವಷ್ಟು ತೀವ್ರವಾಗಿ ಬೆಳೆಯಿತು. ಅದುವರೆಗೆ ಪಠ್ಯಪುಸ್ತಕಗಳಲ್ಲಿ ಅಚ್ಚಾಗುತ್ತಿದ್ದ “ಮೈಸೂರಿನ ಹುಲಿ ಟಿಪ್ಪು ಸುಲ್ತಾನ”, “ಸರ್ವಧರ್ಮಸಹಿಷ್ಣುವಾಗಿದ್ದ ಟಿಪ್ಪು” ಇತ್ಯಾದಿ ವರ್ಣನೆಗಳಿಗೆಲ್ಲಾ ಜೀವಬಂದು ಟಿಪ್ಪು ಜೀವಂತ ಹುಲಿಯನ್ನು ಕೊಲ್ಲುವ ಚಿತ್ರವೂ ಕೂಡಾ ಅಚ್ಚಾಗತೊಡಗಿತು. ಮುಸಲ್ಮಾನರ ಅಟೋ, ಟೆಂಪೋ, ಸ್ಕೂಟರುಗಳಲ್ಲೆಲ್ಲಾ “ಏಕ್ ಥಾ ಟೈಗರ್” ಎಂಬ ಸ್ಟಿಕ್ಕರುಗಳೂ ಅಂಟಿಸಲ್ಪಟ್ಟವು. ರಾಜಕೀಯ ಪಕ್ಷಗಳು ವೋಟಿಗಾಗಿ ಟಿಪ್ಪು ಸಂಘಟನೆಗಳನ್ನು ಬಳಸಿಕೊಂಡವು. ಇಸ್ಲಾಮಿನ ಪ್ರಚಾರಕ್ಕೆ ಓರ್ವ ಮಹಾಪುರುಷ ಸಿಕ್ಕಿಬಿಟ್ಟಿದ್ದ. ಇದ್ದಕ್ಕಿದ್ದಂತೆ ಸಾಹಿತಿಗಳೆಲ್ಲರೂ ಆತನ ಬಗ್ಗೆ ಬರೆಯತೊಡಗಿದರು. ಭಾಷಣಗಳಲ್ಲೂ ಟಿಪ್ಪು ಬಂದುಹೋದ. ಇನ್ನೂ ಒಂದು ವಿಶೇಷವೆಂದರೆ ಅಷ್ಟರಹೊತ್ತಿಗೆ ಟಿಪ್ಪು ಕೇವಲ ಮುಸಲ್ಮಾನರ ಪ್ರಿಯನಾಗಿರದೆ ಮುಸಲ್ಮಾನರನ್ನು ಹೊಗಳುವವರ ಪ್ರೀತಿಯ ವ್ಯಕ್ತಿಯೂ ಆಗಿದ್ದ. ಜಾತ್ಯತೀತ ಸಮಾಜದ ಮಹಾನ್ ನಾಯಕನೂ ಆಗಿ ಬೆಳೆದಿದ್ದ. ಹಿಂದೂ ಬುದ್ಧಿಜೀವಿಗಳೆಲ್ಲರೂ ಆತನ ಹಿಂದೆ ನಿಂತರು. ಶ್ರೀರಂಗಪಟ್ಟಣದ ಗೋರಿ, ಕಲ್ಲು-ಕಂಬಗಳಿಗೆಲ್ಲಾ ಫಲಕಗಳು ಬಂದು ಎಲ್ಲವೂ ಟಿಪ್ಪು ಸ್ವತ್ತಾಗಿ ಬದಲಾಯಿತು. ರಂಗುರಂಗಿನ ಕಥೆಗಳು ಹುಟ್ಟಿಕೊಂಡವು. ಓರ್ವ ಸಮರ್ಥ, ದಕ್ಷ, ಆಡಳಿತ ಮುತ್ಸದ್ಧಿ ರಾಜನನ್ನು ವರ್ಣಿಸುವ ಪದಪುಂಜಗಳೆಲ್ಲವೂ ಟಿಪ್ಪು ವೈಭಕರಣಕ್ಕೆ ಬಳಕೆಯಾದವು. ಹೀಗಾಗಿ ಆತ ಭಾಷಾಪ್ರೇಮಿಯಾದ, ವ್ಯವಸ್ಥ್ಥಿತ ಆಡಳಿತಗಾರನೂ ಆದ, ಶಾಂತಿಪ್ರಿಯನೂ ಆದ, ಸರ್ವಧರ್ಮ ಸಮನ್ವಯಕಾರನೂ ಆದ, ಮೈಸೂರಿನ ರಕ್ಷಕನೂ ಆದ, ಸ್ವಾತಂತ್ರ್ಯ ಹೋರಾಟಗಾರನೂ ಆದ, ರಾಷ್ಟ್ರೀಯವಾದಿಯೂ ಆದ. ಇಂಥವನ ಜನ್ಮದಿನ ಕರ್ನಾಟಕದ ಅರುಣೋದಯದ ದಿನವೆಂದೂ ಬಲಿದಾನವನ್ನು ರಾಷ್ಟ್ರೀಯ ಹಬ್ಬವೆಂದೂ ಪ್ರತಿಪಾದಿಸುವ ಸೆಕ್ಯುಲರ್ವಾದಿಗಳು ವಿಪರೀತ ಹೆಚ್ಚಿದರು. ರಸ್ತೆ, ವೃತ್ತ, ಸೇತುವೆಗಳಿಂದ ಹಿಡಿದು ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಕ್ಕೂ ತನ ಹೆಸರಿಡಬೇಕೆಂಬ ಬೇಡಿಕೆ, ಹೋರಾಟಗಳು ಶುರುವಾದವು. ಅಕ್ಬರ, ಔರಂಗಜೇಬರು ಇತಿಹಾಸಕಾರರ , ರಾಜಕಾರಣಿಗಳ ಕೈಗೆ ಸಿಕ್ಕಿ ಮೂಲ ಸ್ವರೂಪ ಬದಲಿಸಿಕೊಂಡಂತೆ ಕರ್ನಾಟಕಕ್ಕೂ ಅಕ್ಬರ, ಔರಂಗಜೇಬನಂಥ ವ್ಯಕ್ತಿತ್ವ ಸಿಕ್ಕಿತ್ತು. ಅದೂ ಅಚಾನಕ್ಕಾಗಿ ಸಿಕ್ಕಿತ್ತು. ವೋಟ್ಬ್ಯಾಂಕ್ ರಾಜಕಾರಣಕ್ಕೆ ಇಂಥವನೊಬ್ಬನ ಆವಶ್ಯಕತೆ ಇತ್ತಾದರೂ ಅದಕ್ಕೆ ಮೈಸೂರಿನ ಅರಸರನ್ನು ಅಲ್ಲಗೆಳೆದು ಟಿಪ್ಪುವನ್ನು ತರುವ ಧೈರ್ಯವಿರಲಿಲ್ಲ. ಆದರೆ ಸುವರ್ಣಾವಕಾಶವೊಂದು ರಾಜಕಾರಣಕ್ಕೆ ಅನಾಯಾಸವಾಗಿ ಬಂದೊದಗಿತ್ತು.
ಇಷ್ಟೆಲ್ಲಾ ಶುರುವಾಗಿದ್ದು ಒಂದು ಪೊಲೀಸ್ ಸ್ಟೇಷನ್ನಿನಲ್ಲಿ ಎಂಬುದು ಸೋಜಿಗ ಮತ್ತು ಓರ್ವನ ಸ್ವಾರ್ಥಕ್ಕಾಗಿ ಎಂಬುದು ಮತ್ತೊಂದು ವಿಶೇಷ. ಟಿಪ್ಪು ರಾಜ್ಯಾದ್ಯಂತ ಇಷ್ಟೆಲ್ಲಾ
ಆವರಿಸಿಕೊಳ್ಳುತ್ತಿದ್ದಂತೆ ಆತನಿಂದ ನೊಂದವರು, ಆತನ ಪಾಪಕೃತ್ಯಗಳಿಗೆ ಬಲಿಯಾದವರು ಆತನ ಚರಿತ್ರೆಯನ್ನು ಕೆದಕುವ ಪ್ರಯತ್ನವನ್ನು ಕೂಡಾ ಮಾಡಿದರು. ಆಂಗ್ಲ ಸೇನಾಧಿಕಾರಿಗಳ ದಾಖಲೆಗಳನ್ನು ಶೋಧಿಸುವ ಕೆಲಸಗಳು ನಡೆದವು. ಕೆಲವು ಆಂಗ್ಲ ಪುಸ್ತಕಗಳು ಬಂದವು. ಅವುಗಳಲ್ಲಿ ಕೆಲವು ಕನ್ನಡಕ್ಕೂ ಅನುವಾದಗೊಂಡವು. ಸಂಶೋಧಕರು ಸತ್ಯವನ್ನು ನಿರ್ಭಯವಾಗಿ ಮಂಡಿಸಿದರು. ಪತ್ರಕರ್ತರು ತಲೆ ಎತ್ತಿ ಸತ್ಯವನ್ನು ಬರೆದರು. ಭಾಷಣಕಾರರು ಸತ್ಯಕ್ಕೆ ಸಾವಿಲ್ಲ ಎಂದು ಟಿಪ್ಪು ನಿಜಸ್ವರೂಪವನ್ನು ಬಯಲು ಮಾಡತೊಡಗಿದರು. ಬಹುಭಾಷಾ ಲೇಖಕ, ಚಿಂತಕ ಐ.ಮಾ. ಮುತ್ತಣ್ಣನವರ “ಟೀಪು ಸುಲ್ತಾನ್ ಎಕ್ಸರೇಡ್”, ಡಿ.ಕೆ ಶರ್ಮಾರವರ “ದಿ ರಿಯಲ್ ಟೀಪು”, ಡಾ|ಚಿದಾನಂದ ಮೂರ್ತಿಯವರ “ಮೂಲ ದಾಖಲೆಗಳಲ್ಲಿ ಹುದುಗಿರುವ ಟಿಪ್ಪು”, ಪ್ರತಾಪ್ ಸಿಂಹರ “ಟಿಪ್ಪು ಸುಲ್ತಾನ ಸ್ವಾತಂತ್ರ್ಯ ವೀರನಾ?”, ಸಂದೀಪ್ ಬಾಲಕೃಷ್ಣರವರ “ಟಿಪ್ಪು ಸುಲ್ತಾನ್: ದಿ ಟೈರೆಂಟ್ ಆಫ್ ಮೈಸೂರ್” ಪುಸ್ತಕಗಳು ಟಿಪ್ಪುವಿನ ಕ್ರೌರ್ಯ, ಮತಾಂಧತೆ ಮತ್ತು ಜನದ್ರೋಹಿ ಕೆಲಸಗಳನ್ನು ತೆರೆದಿಟ್ಟಿತು. ನವಮಾಧ್ಯಮಗಳು ಬಂದಮೇಲಂತೂ ಟಿಪ್ಪು ವಿರುದ್ಧ ಚಳವಳಿಯೇ ನಡೆದವು. ಟಿಪ್ಪು ವೈಭವ ವಿಪರೀತವಾದಾಗಲೆಲ್ಲಾ ಇವು ತಮ್ಮ ಧ್ವನಿಯನ್ನು ಎತ್ತಿದವು.
ಆದರೆ ಟಿಪ್ಪು ನಿಜಸ್ವರೂಪ ಹೊರಬಂದಿದ್ದು ಆತನ ವೈಭವೀಕರಣಕ್ಕೆ ಪ್ರತಿರೋಧವಾಗಿಯೇ.ಅದಕ್ಕೂ ಹೊರತಾದ ಸತ್ಯ ಚರಿತ್ರೆಯ ಪುಟಗಳಲ್ಲಿದೆ. ಕೊಡಗಿನ ಐನ್ ಮನೆಗಳಲ್ಲಿದೆ. ಅದು ಮತ್ತಷ್ಟು ಪ್ರಭಾವಿಯಾಗಿ ಹೊರಬರಬೇಕಾಗಿದೆ. ಅದು ಸದ್ಯದ ತುರ್ತು ಕೂಡಾ. ಅದರ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಟಿಪ್ಪುವಿಗಿಂತ ಮೊದಲು ಈ ರಾಜ್ಯದಲ್ಲಿ ಯಾರೊಬ್ಬನೂ ಸುವ್ಯವಸ್ಥಿತ ಆಡಳಿತವನ್ನು ಮಾಡಿರಲಿಲ್ಲ, ಅಂಥ ಆಡಳಿತಗಾರನೇ ಇರಲಿಲ್ಲ ಎಂಬ ಅತಿಶಯ ರೂಪಕ-ವಿಶ್ಲೇಷಣೆಗಳಿಂದ ಹೊಗಳಲ್ಪಡುತ್ತಿರುವ ಟಿಪ್ಪು ಸುಲ್ತಾನ ಅಸಲಿಗೆ ಯಾರು? ಆತ ರಾಜನೋ? ಅಲ್ಲವೋ? ರಾಜನಾಗಿದ್ದರೆ ಯಾವ ರಾಜಮನೆತನದವನಾಗಿದ್ದ? ಆತ ರಾಷ್ಟ್ರೀಯವಾದಿಯೇ? ಸ್ವಾತಂತ್ರ್ಯ ಹೋರಾಟಗಾರನೇ? ಎಂಬುದೆಲ್ಲಾ ಅನಂತರದ ಪ್ರಶ್ನೆ. ಆತನ ವಂಶಾವಳಿಯನ್ನು ಅರಿಯುವುದು ಟಿಪ್ಪು ಚಿರಿತ್ರೆಯನ್ನು ಹೇಳುವಲ್ಲಿ ಮೊದಲಿಗೆ ಆಗಬೇಕಾದ ಕಾರ್ಯ. ಏಕೆಂದರೆ ಮಹಾನ್ ಅರಸನಾಗಿರುವವನೊಬ್ಬನ ಹಿನ್ನೆಲೆ ಒಂದೋ ಧ್ಯೇಯಮಾರ್ಗದ್ದಾಗಿರಬೇಕು ಇಲ್ಲವೇ ಆತ ಮಹಾಪ್ರತಿಭಾವಂತನೋ, ಶೌರ್ಯವಂತನೋ ಆಗಿರಬೇಕು. ಹಾಗೆಯೇ ಟಿಪ್ಪು ಹಿನ್ನೆಲೆ ಇವೆರಡರಲ್ಲಿ ಒಂದು ಆಗಿರಬೇಕಿತ್ತು. ಆದರೆ ಆತನ ಹಿನ್ನ್ನೆಲೆಯೇ ಭಯಂಕರವಾದುದು. ಅಂದರೆ ಆತನ ಅಪ್ಪನೇ ಸಂಸ್ಕಾರಹೀನ ಮತ್ತು ಉಂಡ ಮನೆಗೆ ಎರಡು ಬಗೆಯುವ ಬುದ್ಧಿಯವನಾಗಿದ್ದ. ಇಂಥವನ ಬೀಜಕ್ಕೆ ಹುಟ್ಟಿದವ ಟಿಪ್ಪು ಇನ್ನು ಹೇಗಿರಲು ಸಾಧ್ಯ?
ಅಷರಾಫ್ ಷಾ ಎಂಬ ಅರಬ್ಬೀ ಸಂಸಾರಸ್ಥನೊಬ್ಬ ತನ್ನ ತುಂಬು ಕುಟುಂಬದೊಡಗೂಡಿ ಭಾರತಕ್ಕೆ ವಲಸೆ ಬಂದ. ಆ ವಲಸೆ ವ್ಯಾಪಾರಿ ಸಂಬಂಧಿತವಾಗಿತ್ತೋ ಅಥವಾ ಹೊಟ್ಟೆಪಾಡಿನದಾಗಿತ್ತೋ ತಿಳಿಯದು. ಆದರೆ ಆತ ಬಿಜಾಪುರದ ಸುಲ್ತಾನನ ಬಳಿ ಕೂಲಿಗೆ ನಿಂತದ್ದಕ್ಕೆ ಉಲ್ಲೇಖಗಳಿವೆ. ಕೂಲಿ ಮಾಡುತ್ತಿದ್ದ ಆ ಸಂಸಾರ ಅಲ್ಲೇ ಬೆಳೆಯತೊಡಗಿತು. ಈ ಕುಟುಂಬದ ಒಂದು ಶಾಖೆ ಅಲ್ಲಿ ಹೊಟ್ಟೆಗೆ ಸಾಲದೆ ಕೋಲಾರಕ್ಕೆ ಬಂದು ಬೀಡುಬಿಟ್ಟಿತು. ಗಂಡ, ಹೆಂಡತಿ ಮತ್ತು ಮೂರು ಗಂಡುಮಕ್ಕಳಿದ್ದ ಆ ಕುಂಟುಂಬ ಕೋಲಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಆತನ ಹೆಂಡತಿ ಮಡಿದಳು. ಆಕೆಯ ಗೋರಿಯನ್ನು ಅಲ್ಲೇ ಮಾಡಿದ ಯಜಮಾನ ಮಕ್ಕಳನ್ನು ಕಟ್ಟಿಕೊಂಡು ಊರೂರು ಅಲೆಯುತ್ತಿದ್ದ. ಮಕ್ಕಳು ದೊಡ್ಡವರಾಗುತ್ತಿದ್ದರು. ಇವರಲ್ಲಿ ಹಿರಿಯ ಮಗ ಮಹಮದ್ ಫತುಲ್ಲಾ ಸಾಬಿಯು ಸೀರ್ಯ (?)ಎಂಬಲ್ಲಿ ನವಾಬನ ಕೆಳಗೆ ಕೂಲಿಗೆ ನಿಂತನು. ಇವನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರಲ್ಲಿ ಹಿರಿಯವ ಸಾಬಸ್ಸಾಬಿ, ಕಿರಿಯವ ಹೈದರಾಲಿ. ಸೀರ್ಯದ ನವಾಬನಲ್ಲಿ ಕೂಲಿಗಿದ್ದ ಮಹಮದ್ ಫತುಲ್ಲಾಸಾಬಿ ಯಾನೆ ಫತ್ತೇನಾಯಕ ಊರಿಡೀ ಸಾಲ ಮಾಡಿ ಒಂದು ದಿನ ಸತ್ತ. ಸಾಲದ ಹೊರೆ ಮಕ್ಕಳ ಮೇಲೆ ಬಿತ್ತು. ಅವರು ದಾರಿ ಕಾಣದೆ ಫತುಲ್ಲಾನ ಮೂರನೇ ತಮ್ಮ ಅಂದರೆ ದೊಡ್ಡಬಳ್ಳಾಪುರದ ಪಾಳೇಗಾರನ ಬಳಿ ಚಾಕರಿಗಿದ್ದ ಗುಲಾಂ ಸಾಬಿಯ ಕಾಲಿಗೆ ಬಿದ್ದರು. ಆದರೆ ಗುಲಾಂ ಸಾಬಿ ತನ್ನ ಅಣ್ಣನ ಮಕ್ಕಳ ಸ್ಥಿತಿಯನ್ನು ಕೇಳಿ ತನ್ನದೂ ಕೂಡಾ ಅದೇ ಪರಿಸ್ಥಿತಿ ಎಂದು ಕೈಯಾಡಿಸಿಬಿಟ್ಟ. ಮತ್ತು ತನ್ನ ಮತ್ತೊಬ್ಬ ಅಣ್ಣ ಗುಲಾಂ ಹೈದರಾಲಿಯ ಬಳಿ ಸಹಾಯ ಸಿಗಬಹುದೆಂದು ಅವರನ್ನು ಆತನ ಬಳಿಗೆ ಕರೆದೊಯ್ದ. ಆತ ಶ್ರೀರಂಗಪಟ್ಟಣಕ್ಕೆ ಸೇರಿದ ಮದ್ದಗಿರಿ ಎಂಬಲ್ಲಿನ ಪಾಳೇಗಾರನಲ್ಲಿ ಕೂಲಿಗೆ ನಿಂತಿದ್ದ. ಒಟ್ಟು ಕುಟುಂಬವೇ ಕೂಲಿಯವರಾಗಿದ್ದರು. ತನ್ನ ದೊಡ್ಡಣ್ಣನ ಮಕ್ಕಳ ಪರಿಸ್ಥಿತಿಗಳನ್ನೆಲ್ಲಾ ಕೇಳಿದ ಗುಲಾಂ ಹೈದರಾಲಿ ತನ್ನ ಒಡೆಯ ಪಾಳೇಗಾರ ಮಲ್ಲರಾಜಯ್ಯನ ಕಾಲಿಗೆ ಬಿದ್ದು ಸಾಲವನ್ನು ತೀರಿಸಬೇಕೆಂದೂ ಪ್ರತಿಯಾಗಿ ಇವರು ಜೀವನಪರ್ಯಂತ ತಮ್ಮ ಚಾಕರಿ ಮಾಡುತ್ತಾರೆಂದೂ ನಿವೇದಿಸಿಕೊಂಡ. ಗುಲಾಮರ ಆವಶ್ಯಕತೆ ಇದ್ದ ಪಾಳೆಗಾರ ಸಾಲವನ್ನು ತೀರಿಸಿ ಹೈದರಾಲಿ ಮತ್ತು ಸಾಬಸ್ಸಾಬಿಯನ್ನು ಜೀತಕ್ಕಿಟ್ಟುಕೊಂಡ. ನಮ್ಮ ರಾಜ್ಯದ ಬುದ್ಧಿಜೀವಿಗಳ ಆರಾಧ್ಯ ದೈವ ಟಿಪ್ಪು ಸುಲ್ತಾನ್ ಇಂಥ ರಾಯಲ್ ಫ್ಯಾಮಿಲಿಯವನು!
ಅದು ೧೮ನೇ ಶತಮಾನದ ಮಧ್ಯಭಾಗ. ಶ್ರೀರಂಗಪಟ್ಟಣ ಮತ್ತು ಮೈಸೂರು ಸೀಮೆಗಳ ಆಡಳಿತಗಾರರಲ್ಲಿ ಅಂತಃಕಲಹ, ಒಳಜಗಳ, ಸಂಚುಗಳು ಶುರುವಾಗುತ್ತಿದ್ದವು. ಅದೇ ಹೊತ್ತಿನಲ್ಲಿ ಹೈದರಾಲಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಉಂಟಾದ ಉಪಟಳವನ್ನು ನಿಭಾಯಿಸಲು ಶ್ರೀರಂಗಪಟ್ಟಣದಿಂದ ಕಳುಹಿಸಿದ ತಂಡದಲ್ಲಿ ಒಬ್ಬನಾಗಿದ್ದ. ಮುಸಲ್ಮಾನರಲ್ಲಿ ಹುಟ್ಟುತ್ತಲೇ ಬಂದಿರುವ ಅಧಿಕಪ್ರಸಂಗ ಬುದ್ಧಿಯಿಂದ ಹೈದರಾಲಿ ಆ ತಂಡದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟ. ಅವರ ಗೂಂಡಾ ಪ್ರವೃತ್ತಿಯಿಂದ ಯುದ್ಧದಲ್ಲಿ ಅತೀ ಹೆಚ್ಚಿನ ಕ್ರೌರ್ಯವನ್ನು ಆತ ಪ್ರದರ್ಶಿಸಿದ. ೧೭೪೬ರ ಹೊತ್ತಿಗೆ ದೇವನಹಳ್ಳಿ ಶಾಂತ ಸ್ಥಿತಿಗೆ ಬಂದಿತ್ತು. ಮುಂದಿನ ವರ್ಷ ಮೊಗಲರ ವಜೀರ ನಾಸರಜಂಗನಿಗೂ ಆರ್ಕಾಟಿನ ನವಾಬನಿಗೂ ಯುದ್ಧ ನಡೆದಾಗ ಕಳುಹಿಸಲ್ಪಟ್ಟ ಶ್ರೀರಂಗಪಟ್ಟಣದ ದಂಡಿನಲ್ಲೂ ಹೈದರಾಲಿ ಇದ್ದ. ಹೈದರನಿಗೆ ಯಾವ ಹೊಣೆಯೂ ಇಲ್ಲದಿದ್ದರೂ ಅಧಿಕಾರವಿಲ್ಲದಿದ್ದರೂ ಯುದ್ಧರಂಗದಲ್ಲಿ ಆತನ ಕಪಟ ಬುದ್ಧಿ ಸೇನೆಯ ಮುಖ್ಯಸ್ಥರಿಗೂ ಪ್ರಯೋಜನಕ್ಕೆ ಬಂತು. ನಾಸರಜಂಗನನ್ನು ಲೂಟಿ ಮಾಡುವ ಯೋಜನೆಯನ್ನೇ ಈತ ಕೊಟ್ಟಿದ್ದ. ಅದು ಯಶಸ್ವಿಯೂ ಆಯಿತು. ಮತ್ತು ಅಷ್ಟರಲ್ಲಾಗಲೇ ಹೈದರನ ಒಂದು ಗುಂಪು ಸಿದ್ಧವಾಗಿತ್ತು. ಈ ಗುಂಪು ನಾಸರಜಂಗನ ೧೫ ಒಂಟೆಗಳು ಮತ್ತು ಅವುಗಳ ಮೇಲಿದ್ದ ಸಂಪತ್ತಿನ ಹೊರೆಯನ್ನು ಲೂಟಿ ಹೊಡೆಯಿತು. ಕುಟಿಲ ಹೈದರಾಲಿ ಅದನ್ನು ನ್ಯಾಯೋಚಿತವಾಗಿ ದಳವಾಯಿಗೆ ಒಪ್ಪಿಸಬೇಕಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ತಾನೇ ದೊರೆಗಳಿಗೆ ಅದನ್ನು ಮುಟ್ಟಿಸಿ ಬಂದ. ಆತನ ಪ್ರಾಮಾಣಿಕತೆ ಮತ್ತು ಶೌರ್ಯಕ್ಕೆ ತಲೆದೂಗಿದ ದೊರೆಗಳು ಸಮ್ಮಾನ, ಪ್ರಶಸ್ತಿಗಳನ್ನು ನೀಡಿದ್ದಲ್ಲದೆ ೧೫ ಒಂಟೆ ಹೊರೆಗಳಲ್ಲಿ ಹನ್ನೆರಡನ್ನು ತಾವಿಟ್ಟುಕೊಂಡು ಉಳಿದ ಮೂರನ್ನು ಹೈದರನಿಗೆ ಕೊಟ್ಟರು. ಹೈದರನಿಗೆ ಯಾರ್ಯಾರನ್ನು ಎಲ್ಲೆಲ್ಲಿ ಮೀಟಬೇಕು ಎಂದು ತಿಳಿದಿತ್ತು. ಮತ್ತು ಆರ್ಕಾಟ್ ಯುದ್ಧದಲ್ಲಿ ಉಳಿದ ಯೋಧರ ಮಹತ್ತ್ವ ಕಡಿಮೆ ಮಾಡಿ ತಾನೊಬ್ಬನೇ ಗುರುತಿಸಲ್ಪಡಬೇಕು ಎಂದು ಎಣಿಸಿದ್ದ. ಮಹಾರಾಜರ ಅಂತರಂಗ ಪ್ರವೇಶಿಸಲು ಸುಸಂದರ್ಭವನ್ನಾಗಿ ಅದನ್ನು ಬಳಕೆ ಮಾಡಿಕೊಂಡ. ವಾಸ್ತವವಾಗಿ ಮೈಸೂರು ಸಂಸ್ಥಾನದ ಬುಡ ಅಂದೇ ಅಲ್ಲಾಡಿತ್ತು.
ಈ ಘಟನೆಯ ತರುವಾಯ ಹೈದರನ ಅಸ್ತಿತ್ವ ಬಲವಾಗತೊಡಗಿತು. ಆತ ತನ್ನನ್ನು ತಾನು ಅರಮನೆಗೆ ನಂಬಿಗಸ್ಥನಂತೆ ಹೆಚ್ಚುಹೆಚ್ಚು ಬಿಂಬಿಸಿಕೊಳ್ಳತೊಡಗಿದ.ಎಲ್ಲಾ ಅವಕಾಶಗಳನ್ನು ಹೈದರ್ ಬಳಸಿಕೊಂಡ. ಅದೇ ಹೊತ್ತಲ್ಲಿ ಮಹಾರಾಜರ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ನೆಪ ಒಡ್ಡಿ ಚಂದಾಸಾಹೆಬ್ ಮತ್ತು ದಿವಾನ್ ಶೇಷಗಿರಿ ಎಂಬವರನ್ನು ಕರೆಸಿ ಮೋಸದಿಂದ ತಲೆಕತ್ತರಿಸಿ ಅದನ್ನು ಅರಮನೆಗೆ ಕಳುಹಿಸಿಕೊಟ್ಟ. ಹಿತ್ತಾಳೆ ಕಿವಿಯ ಅರಸರು ಇದರಿಂದ ಸಂತುಷ್ಟರಾಗಿ ಆ ತಲೆಗಳನ್ನು ಅರಮನೆಯ ದ್ವಾರದಲ್ಲಿ ತೋರಣ ಕಟ್ಟಿಸಿದ್ದರು. ಇದು ಹೈದರನ ಖದರನ್ನು ಮತ್ತೂ ಹೆಚ್ಚು ಮಾಡಿತು. ಜನರು ಹೈದರ್ ಎಂದರೆ ಹೆದರುವಂತಾದರು. ಸರಿಯಾಗಿ ಇದೇ(೧೭೫೫)ಸಮಯದಲ್ಲಿ ಚೆನ್ನಪಟ್ಟಣದಲ್ಲಿ ಸಂಬಳಕ್ಕಾಗಿ ಖ್ಯಾತೆ ತೆಗೆಯುತ್ತಿದ್ದ ಸೈನಿಕರಿಗೆ ಹೈದರ್ ತಾನೇ ಕಿಸೆಯಿಂದ ಸಂಬಳವನ್ನು ಕೊಟ್ಟ. ಅತ್ತ ತಿರುಚನಾಪಳ್ಳಿಯಲ್ಲಿ ನಡೆಯುತ್ತಿದ್ದ ಗಲಭೆ ಅಡಗದೆ ಇರಲು ಹೈದರ್ ತಾನೇ ಹೆಚ್ಚುವರಿ ಪಡೆಗಳನ್ನು ಅಲ್ಲಿ ಕಟ್ಟಿದ. ಮತ್ತು ಸಂಬಳವನ್ನು ತಾನೇ ಪಾವತಿಸಿದ. ಇವನ್ನೆಲ್ಲಾ ಮಹಾರಾಜರು ಗಂಭೀರವಾಗಿ ಪರಿಗಣಿಸುವ ಬದಲು ಹೈದರನ ಸ್ವಾಮಿನಿಷ್ಠೆಯನ್ನು ಹೊಗಳತೊಡಗಿದರು. ಅವರು ಹೈದರಾಲಿಯನ್ನು ಎಷ್ಟೊಂದು ನಂಬಿದ್ದರೆಂದರೆ ಆತನಗೆ ಱಬಹಾದ್ದೂರ್ೞ ಎಂಬ ಬಿರುದನ್ನು ಕೂಡಾ ದಯಪಾಲಿಸಿದರು. ಈರೋಡು, ಸತ್ಯಮಂಗಲ, ಧಾರಾಪುರ ಮತ್ತು ದಿಂಡಿಗಲ್ಲು ಸೀಮೆಯ ಕೆಲವು ಊರುಗಳನ್ನೇ ಬರೆದುಕೊಟ್ಟು ಸರಕಾರದ ಕೆಲಸಕ್ಕೆ ಕರೆದಾಗ ಬರಬೇಕೆಂದು ನಿರೂಪವನ್ನು ಬರೆಸಿದರು. ಅದು ೧೭೫೫ರ ಕೊನೆ. ಮುಂದಿನ ಮಹಾ ಆಪತ್ತು ಅಂದಿನಿಂದಲೇ ಆರಂಭವಾಗಿತ್ತು. ಆದರೂ ಮಹಾರಾಜರ ಸಂಪೂರ್ಣ ಅಧಿಕಾರವನ್ನು ಹೈದರಾಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿಲ್ಲ. ನೋಡನೋಡುತ್ತಲೇ ರಾಜ ಹೈದರನನ್ನು ಅವಲಂಭಿಸಿದ್ದರು. ಹೈದರನನ್ನು ನಂಬಿ ನಿರಾಳವಾಗಿದ್ದರು.
ಇದರ ನಡುವೆ ರಾಜ ಮನೆತನದ ದಳವಾಯಿಯೂ ಆಗಿದ್ದ ದೇವರಾಜಯ್ಯ ಎಂಬವನೊಬ್ಬ ಹೈದರಾಲಿಯ ಮೇಲೆ ಒಂದು ಕಣ್ಣಿಟ್ಟೇ ಇದ್ದ. ಮತ್ತು ಅದನ್ನು ಮಹಾರಾಜರಿಗೆ ಹೇಳಿಯೂ ಇದ್ದ. ಆದರೆ ಹೈದರನ ಬಗ್ಗೆ ಕುರುಡು ವ್ಯಾಮೋಹಿಯಾಗಿದ್ದ ರಾಜರು ದೇವರಾಜಯ್ಯನನ್ನೇ ಶಂಕಿಸಿದರು. ಹೈದರನಿಗೆ ಬಿಟ್ಟುಕೊಟ್ಟ ಸತ್ಯಮಂಗಲದ ಮೇಲೆ ಈತನಿಗೆ ಕಣ್ಣಿದೆ ಎಂದುಕೊಂಡರು. ಆಧುನಿಕ ಸೆಕ್ಯುಲರಿಸಂ ಸೃಷ್ಟಿಸುವ ಎಲ್ಲಾ ಭ್ರಮೆಗಳೂ ರಾಜರನ್ನು ಆವರಿಸಿತ್ತು. ರಾಜರಿಗೂ ದೇವರಾಜಯ್ಯನಿಗೂ ಮನಸ್ತಾಪ ಬೆಳೆದಿದೆ ಎಂಬುದನ್ನು ಮನಗಂಡ ಹೈದರಾಲಿ ಸತ್ಯಮಂಗಲದಲ್ಲೇ ಇದ್ದ ದೇವರಾಜಯ್ಯನನ್ನು ಶ್ರೀರಂಗಪಟ್ಟಣಕ್ಕೆ ಮಾತುಕತೆಗೆಂದು ಕರೆದೊಯ್ದ ಮತ್ತು ರಾಜನಲ್ಲಿ ಕ್ಷಮೆಯನ್ನು ಕೇಳಿಸಿದ. ಕೆಲವು ದಿನಗಳು ಶ್ರೀರಂಗಪಟ್ಟಣದಲ್ಲೇ ಉಳಿದ ದೇವರಾಜಯ್ಯ ಮರಳಿ ಸತ್ಯಮಂಗಲಕ್ಕೆ ಹೊರಟ. ಆದರೆ ದಾರಿಯಲ್ಲೇ ದೇವರಾಜಯ್ಯ ನಿಗೂಢವಾಗಿ ಸತ್ತ. ಈ ಸಾವಿನ ಕುರಿತು ರಾಜರೂ ಪರಿವಾರವೂ ತಲೆಕೆಡಿಸಿಕೊಳ್ಳಲಿಲ್ಲ. ರಾಜರಿಗೆ ಎಚ್ಚೆತ್ತುಕೊಳ್ಳಲು ಇದೂ ಒಂದು ಅವಕಾಶವಾಗಿತ್ತು. ಅದಾದ ಕೆಲದಿನಗಳಲ್ಲಿ ಪುನಃ ಸೇನೆಯಲ್ಲಿ ಸಂಬಳದ ವಿಷಯವಾಗಿ ದಂಗೆ ಪ್ರಾರಂಭವಾಯಿತು. ರಾಜರು ದಂಗೆಯನ್ನು ನಿಭಾಯಿಸಲು ಹೈದರನಿಗೆ ಹೇಳಿ ಕಳುಹಿಸಿದರು. ಆದರೆ ಶ್ರೀರಂಗಪಟ್ಟಣಕ್ಕೆ ಬಂದ ಹೈದರ ವರಸೆ ಬದಲಿಸಿ ಮಾತಾಡಿದ. “ಮಹಾರಾಜರೇ ನಾನೊಬ್ಬ ಸಾಮಾನ್ಯ ಸೇವಕ. ನಾನು ಇಂಥ ದೊಡ್ಡ ಕೆಲಸವನ್ನು ಮಾಡಿದರೆ ವ್ಯರ್ಥಾ ರಾಜಪರಿವಾರ ಮತ್ತು ಅರಮನೆಯ ಜನಗಳ ಕೆಂಗಣ್ಣಿಗೆ ಪಾತ್ರನಾಗುತ್ತೇನೆ. ಜನಗಳು ಆಡಿಕೊಳ್ಳುತ್ತಾರೆ. ನನ್ನನ್ನು ಕ್ಷಮಿಸಬೇಕು” ಎಂದು ವಿನಮ್ರದ ವೇಷ ಹಾಕಿದ. ಆದರೆ ರಾಜರು ಅದಕ್ಕೂ ಮರುಳಾದರು. ಮತ್ತು “ನಿನ್ನ ಮೇಲೆ ನಮ್ಮ ಕೃಪಾಕಟಾಕ್ಷವು ಸಂಪೂರ್ಣವಾಗಿದೆ. ಕ್ಷುದ್ರಶಕ್ತಿಗಳಿಂದ ನಿನಗೇನೂ ಆಗಲಾರದು. ಈಗ ನಾನು ಮಾಡುವ ಕಾರ್ಯವನ್ನೇ ನೀನು ಮಾಡು” ಎಂದು ಆಜ್ಞಾಪಿಸಿದರು. ಹೀಗೆ ಆಜ್ಞಾಪಿಸಿದ ಮಹಾರಾಜರು ಮೈಸೂರು ಸಂಸ್ಥಾನಕ್ಕೆ ಮೊದಲ ವೊಳೆಯನ್ನು ತಾವೇ ಹಾಕಿಬಿಟ್ಟಿದ್ದರು. ಅಂದಿನಿಂದ ಅಂದರೆ ೧೭೫೮ರಲ್ಲಿ ಹೈದರಾಲಿ ದಳವಾಯಿಯಾದನು. ದಂಗೆ ಇದ್ದಕ್ಕಿದ್ದಂತೆ ಅಡಗಿತು. ಆದರೂ ಮಹಾರಾಜರಿಗೆ ಇದರಲ್ಲೇನೋ ಹುನ್ನಾರವಿದೆ ಎಂದು ಅನಿಸಲೇ ಇಲ್ಲ. ಹೈದರ ತನ್ನ ಗೆಳೆಯನಿಗೆ ದಿವಾನಗಿರಿಯನ್ನು ಕೊಡುವಂತೆ ಮಹಾರಾಜರನ್ನು ಒಪ್ಪಿಸಿದ. ಅಲ್ಲಿಂದ ಹೈದರ ತನ್ನ ಅಸಲೀ ಅಧಿಕಾರವನ್ನು ನಡೆಸಲು ಆರಂಭಿಸಿದ. ಅಧಿಕಾರಿ ವರ್ಗವನ್ನು ಹೆದರಿಸಿದ. ಇನ್ನು ಕೆಲವರನ್ನು ಹೊಗಳಿ ನಯವಾಗಿ ಒಲಿಸಿಕೊಂಡ. ರಾಜಧಾನಿಯ ೪ ಸಾವಿರ ಕುದುರೆಗಳಲ್ಲಿ ೩ ಸಾವಿರ ಕುದುರೆಗಳನ್ನು ಖಾಯಂ ಆಗಿ ಇಡಲು ಆಜ್ಞೆ ಮಾಡಿ ಉಳಿದ ೧ ಸಾವಿರ ಕುದುರೆಗಳನ್ನು ತನ್ನ ಜನರಿಗೆ ಒಪ್ಪಿಸಿದ.
ಹೈದರಾಲಿ ರೂಪುಗೊಂಡಿದ್ದು ಆ ಒಂದು ಸಾವಿರ ಕುದುರೆಗಳಿಂದ.
ಆ ಕುದುರೆಗಳನ್ನಿಟ್ಟುಕೊಂಡು ಹೈದರಾಲಿ ಸಾಮ್ರಾಜ್ಯವನ್ನು ಕ್ರಮೇಣ ಹಿಡಿತಕ್ಕೆ ತರತೊಡಗಿದ. ಅದರಲ್ಲಿ ಬಹುಪಾಲು ಸೈನಿಕರು ಮುಸಲ್ಮಾನರೇ ಇರುವಂತೆ ನೋಡಿಕೊಂಡ. ಮತ್ತು ಲೂಟಿಯನ್ನೇ ಮಾಡತೊಡಗಿದ. ಇಸ್ಲಾಮಿನಲ್ಲಿ ಲೂಟಿಯೂ ಒಂದು ಮತೀಯ ಕಾರ್ಯವಾದುದರಿಂದ ಆ ಲೂಟಿ ಅತೀ ಕ್ರೂರತೆಯಿಂದ ಕೂಡಿರುತ್ತಿತ್ತು. ಲೂಟಿಯಲ್ಲಿ ಕಾಫಿರರ ಹತ್ಯೆ ಆರಂಭವಾಗಿದ್ದೂ ಕೂಡಾ ಇದೇ ಹೊತ್ತಲ್ಲಿ. ಆರಂಭದಲ್ಲಿ ತೀರ್ಥಯಾತ್ರಿಗಳನ್ನು ಲೂಟಿ ಮಾಡುತ್ತಿದ್ದರೆ ಅನಂತರ ಊರೂರನ್ನೇ ಲೂಟಿ ಮಾಡಲಾಗುತ್ತಿತ್ತು. ಒಂದು ಸಾವಿರ ಕುದುರೆಗಳು ಸಂಪತ್ತನ್ನು ಶೇಖರಿಸತೊಡಗಿದವು. ಹೀಗೆ ಶೇಖರಿಸಿದ ಸಂಪತ್ತನ್ನು ಹೈದರಾಲಿ ಕೋಟೆಯ ರಹಸ್ಯ ತಾಣದಲ್ಲಿರಿಸಿ ಮುಸಲ್ಮಾನ ಸರದಾರನೊಬ್ಬನನ್ನು ಅದರ ರಕ್ಷಣೆಗೆ ನೇಮಿಸಿದ.
ದಳವಾಯಿ ಹೈದರಾಲಿ ಈಗ ಹೈದರಾಲಿ ಖಾನ್ ಎಂಬುದಾಗಿ ಖ್ಯಾತನಾದ. “ಮೈಸೂರಿನ ಹುಲಿ”ಯ ಪಿತಾಶ್ರೀಯೂ ಶೂರನೂ ರನೂ ಎಂದೆಲ್ಲಾ ಹೊಗಳಲ್ಪಡುವ ಈತನ ಪೂರ್ವಪರ ಹೇಗಿತ್ತು ಎನ್ನುವುದು ಇತಿಹಾಸದಲ್ಲಿ ಮರೆಯಾಗಿರುವ ಸಂಗತಿ. ರಾಜನನ್ನು ಮರಳು ಮಾಡಿ ಆತನ ಅಂತರಂಗದ ಮನುಷ್ಯನಾಗಿದ್ದ ಮಾತ್ರಕ್ಕೆ ಆತನ ದರೋಡೆಕೋರತನ ಮಾಯವಾಗಿಹೋಗುವುದೇನೂ ಇಲ್ಲ. ಹೈದರಾಲಿಯನ್ನು ದರೋಡೆಕೋರ ಎನ್ನಲು ಸಾಧ್ಯವಿಲ್ಲ ಎನ್ನುವುದಾದರೆ ಹಿಟ್ಲರನನ್ನೂ ಕ್ರೂರಿ ಎನ್ನಲೂ ಸಾಧ್ಯವಾಗುವುದಿಲ್ಲ. ಭೂಗತ ಪಾತಕಿಗಳು ನರಸತ್ತ ಮೇಲೆ ಸಂಘಟನೆಗಳನ್ನು ಕಟ್ಟಿಕೊಂಡು ಜನಸೇವೆಯ ವೇಷ ಹಾಕಿದರೆ ಅವರ ಪಾಪ ಕೃತ್ಯಗಳೇನು ಮಾಸಿಹೋಗುತ್ತವೆಯೇ? ಆದರೂ ನಮ್ಮ ಪಾಠ ಪುಸ್ತಕಗಳು ಈ ತರ್ಕದಿಂದ ಹೈದರನನ್ನು ನೋಡದೆ ಆತನನ್ನು ಮೈಸೂರನ್ನು ರಕ್ಷಿಸಿದವನು ಎಂದೇ ಸಾರುತ್ತಿವೆ. ಆತ ಮರಾಠರ ದಾಳಿಯನ್ನು ಎದುರಿಸಿ ಮೈಸೂರು ಸಂಸ್ಥಾನವನ್ನು ರಕ್ಷಣೆ ಮಾಡಿದ ಎಂಬ ಪಠ್ಯಗಳು ಇಂದೂ ಪ್ರಾಥಮಿಕ ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೂ ಇವೆ. ವಾಸ್ತವವೆಂದರೆ ಆತ ಮರಾಠರನ್ನು ಎದುರಿಸುವಷ್ಟು ಪರಾಕ್ರಮಿಯೇನೂ ಆಗಿರಲಿಲ್ಲ. ಆತನ ಒಂದು ಸಾವಿರ ಕುದುರೆಗಳು ದರೋಡೆಯನ್ನು ಮಾಡಬಹುದಿತ್ತೇ ಹೊರತು ಪ್ರಬಲ ಮರಾಠರನ್ನು ಎದುರಿಸುವ ಶಕ್ತಿಯನ್ನೇನೂ ಹೊಂದಿರಲಿಲ್ಲ. ಹೈದರಾಲಿಯಿಂದ ಮರಾಠರು ಸೋಲುತಿದ್ದರೆ ಮರಾಠರು ಆಗಾಗ್ಗೆ ದಾಳಿ ಮಾಡುತ್ತಲೇ ಇರಲಿಲ್ಲ. ಹೈದರನ “ಶೌರ್ಯ”ವನ್ನು ಚೆನ್ನಾಗಿಯೇ ತಿಳಿದಿದ್ದ ಮರಾಠ ಸರದಾರ ಮಿರ್ಜಿ ಗೋಪಾಳರಾವ್ ಆತನನ್ನು ಚೆನ್ನಾಗಿಯೇ ಬಳಸಿಕೊಂಡ. ಭೃಹತ್ ದಂಡಿನೊಡನೆ ಬರುವುದು ಮತ್ತು ದೊಡ್ಡ ಮೊತ್ತಕ್ಕೆ ಬೇಡಿಕೆಯನ್ನಿಡುವುದು ಮಾಡುತ್ತಲೇ ಬಂದ ಗೋಪಾಳರಾವ್ ಸಂಸ್ಥಾನದ ಹಣವನ್ನು ಹೈದರನ ಕೈಯಿಂದ ಸಾಕಷ್ಟು ಖಾಲಿ ಮಾಡಿಸಿದ್ದ. ಪ್ರತೀ ಬಾರಿಯೂ ಮರಾಠರು ಹೈದರನಿಗೆ ಚೆನ್ನಪಟ್ಟಣ ಅಥವಾ ಬೆಂಗಳೂರನ್ನು ಬಿಟ್ಟುಕೊಡಬೇಕು ಇಲ್ಲವೇ ಇಂತಿಷ್ಟು ಕಪ್ಪವನ್ನು ಒಪ್ಪಿಸಬೇಕು ಎಂಬ ಷರತ್ತನ್ನು ಇಡುತ್ತಿದ್ದರು. ಮರಾಠರಿಗೆ ಆ ಪ್ರದೇಶಗಳನ್ನು ಕಟ್ಟಿಕೊಂಡು ಏಗುವುದಕ್ಕಿಂತ ಕಪ್ಪವೇ ಲಾಭವಾಗಿತ್ತು. ಒಂದರ್ಥದಲ್ಲಿ ಶ್ರೀರಂಗಪಟ್ಟಣದ ತಿಜೋರಿ ಮರಾಠರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು. ಹೈದರ ಖಜಾನೆ ಯಾರಪ್ಪನ ಗಂಟು ಎಂಬಂತೆ ತಂದೂತಂದೂ ಮರಾಠರ ಪಾದಕ್ಕೆ ಸುರಿಯುತ್ತಿದ್ದ.
ಇಷ್ಟ್ಟೆಲ್ಲಾ ಆದರೂ ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರು ಹೈದರನಿಂದಲೇ ಸಾಮ್ರಾಜ್ಯ ಮರಾಠರ ಕೈವಶವಾಗುವುದು ತಪ್ಪಿತು ಎಂದೇ ಹೇಳುತ್ತಿದ್ದರು. ಒಂದು ದಿನ ರಾಜರು ಆತನನ್ನು ಅರಮನೆಗೆ ಕರೆಸಿ ಹೈದರಾಲಿ ಖಾನ್ ನವಾಬ್ ಎಂಬುದಾಗಿ ಹೆಸರಿಟ್ಟು ಆನೆ ಕುದುರೆಗಳನ್ನು ನೀಡಿ ಇನ್ನು ಮುಂದೆ ಸರದಾರರೆಲ್ಲರೂ ಆತನಿಗೆ ನಡೆದುಕೊಳ್ಳಬೇಕೆಂದು ಕಟ್ಟಪ್ಪಣೆಯನ್ನು ಹೊರಡಿಸಿದರು.
ಅರಮನೆಯಿಂದ ಹೂವಿನ ಹಾರಗಳನ್ನೂ ವೀಳ್ಯವನ್ನೂ ಪಡೆದು ಬಂದ ಹೈದರಾಲಿಯು ಮೊಟ್ಟಮೊದಲು ಮಾಡಿದ ಕೆಲಸವೆಂದರೆ ಅರಮನೆಯ ನಿಷ್ಟಾವಂತ ಸೇವಕರಾಗಿದ್ದ ಖಂಡೇರಾವ್ ಮತ್ತು ದಳವಾಯಿ ನಂಜರಾಜಯ್ಯನವರ ಬಗ್ಗೆ ಮಹಾರಾಜರಲ್ಲಿ ಕಿವಿಯೂದಿದ್ದು. ಇನ್ನೊಂದು ತನ್ನ ಭಾವಮೈದ ಸ್ಯೆಯದ್ ಮೊಕದ್ದಂ ಸಾಬಿಯನ್ನು ಬೆಳೆಸಿದ್ದು. ಅದು ಮುಂದೆ ಹೈದರಾಲಿಗೆ ಪ್ರಯೋಜನಕ್ಕೆ ಬಂತು. ಮತ್ತು ತನ್ನ ಬೆಳೆಯುತ್ತಿದ್ದ ಮಗನನ್ನು ದಂಡು-ಅರಮನೆ ಮುಂತಾದೆಡೆಗಳಿಗೆ ಕರೆದೊಯ್ಯಲು ಹೈದರ್ ಶುರು ಮಾಡಿದ್ದ. ಮಗ ಟಿಪ್ಪೂ ಸುಲ್ತಾನ ತಂದೆಯ ಎಲ್ಲಾ ಲೂಟಿಗಳನ್ನೂ ಮಹಾರಾಜರ ಮುಂದೆ ಆತ ನಡೆದುಕೊಳ್ಳುತ್ತಿದ್ದ ನಕಲಿ ವಿನಮ್ರತೆಗಳನ್ನೂ ನೋಡುತ್ತಲೇ ಬೆಳೆದ. ಇದರ ಜೊತೆಗೆ ಅರಮನೆಯಲ್ಲಿ ಕೆಲವು ನಿಗೂಢಗಳು ಸಂಭವಿಸಿದವು. ಕೆಲವು ರಾಜಪರಿವಾರದ ಸದಸ್ಯರು ನಿಗೂಢವಾಗಿ ಕಾಯಿಲೆಗೆ ಗುರಿಯಾಗಿ ಸತ್ತರು. ಕೆಲವರು ಏಕಾಏಕಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಸತ್ತರು. ೧೭೭೦ನೇ ಇಸವಿಯಲ್ಲೊಮ್ಮೆ ರಂಗನಾಥ ದೇವರ ರಥದ ಮೇಲಿರುವ ಕಸ್ತೂರಿ ರಂಗವೆಂಬ ಉತ್ಸವ ಮೂರ್ತಿಗೆ ಇದ್ದಕ್ಕಿದ್ದಂತೆ ಬೆಂಕಿ ಬಿತ್ತು. ಅದಾದ ಕೆಲವು ದಿನಗಳಲ್ಲೇ ಮದ್ದಿನ ಮನೆಗೆ ಬೆಂಕಿ ಬಿದ್ದು ಅದು ಹರಡಿ ರಂಗನಾಥ ಸ್ವಾಮಿಯ ಗುಡಿಯ ಮುಚ್ಚಳದ ಕಲ್ಲು ಬಿದ್ದುಹೋಯಿತು. ೧೯೮೨ರಲ್ಲಿ ಹೈದರ್ ಆರ್ಕಾಟಿನ ದರೋಡೆಯನ್ನು ಇನ್ನೂ ಪೂರ್ತಿಗೊಳಿಸುತ್ತಿದ್ದಾಗಲೇ ಯಾವುದೋ ಖಾಹಿಲೆ ಬಿದ್ದು ಮಲಗಿದ. ಮತ್ತೆ ಆತ ಏಳಲಿಲ್ಲ. ಅಷ್ಟರ ಹೊತ್ತಿಗೆ ಮಗ ಟಿಪ್ಪು ತರುಣನಾಗಿದ್ದ. ಅಪ್ಪನ ಎಲ್ಲಾ ಗುಣಗಳನ್ನೂ ನೋಡುತ್ತಾ ಟಿಪ್ಪು ಬೆಳೆದಿದ್ದ. ಅಂದರೆ ದರೋಡೆ, ಕೊಲೆ, ಹುನ್ನಾರ, ಕಟಿಲ ನೀತಿ, ದ್ವೇಷ, ಮತಾಂಧತೆ ಎಲ್ಲವೂ ಅವನಿಗೆ ಸಿದ್ಧಿಸಿತ್ತು.
ರಾಜನೊಬ್ಬನ ಮಗ ರಾಜನೇ ಆಗಬೇಕಿರಲಿಲ್ಲ. ಆದರೆ ಇಲ್ಲಿ ದರೋಡೆಕೋರನ ಮಗ ಅಪ್ಪನನ್ನೇ ಮೀರಿಸುವ ದರೋಡೆಕೋರನೂ ಕುಟಿಲನೀತಿ ತಜ್ಞನೂ ಆದ.